ಉಮರನ ಒಸಗೆ

ಒಲವಿನ ಬೇಗೆಯ ಬೀಸುಗೋಲಿನ ಬಾಸಾಳಗಳ ತಾಳಲಾರೆ ಬಾರೆ
ಮನ್ಮಥನ ಚೆಂದುಟಿ ನಿನ್ನ ಚೆನ್ನೈದಿಲೆ ಮೈಯನೆಲ್ಲ
ಮುದ್ದಿಟ್ಟು ರಂಗೇರಿಸಿದೆ
ಭಾವೋದ್ವೇಗದ ಸೆಳೆಮಿಂಚು
ಉಕ್ಕಿಹರಿದು ಬಾಯಿ ಕಣ್ಣುಗಳ ಮುದ್ರಿಸಿದೆ
ನರನರಗಳನುದ್ರೇಕಿಸಿದೆ
ಮದಿರೆಯ ಮತ್ತೊಂದು
ಮದನನ ಮುದವೊಂದು ಹದವಾಗಿದೆ ಬಾ
ರಸಜೇನುಂಡ ಎದೆವೊಲ
ಹಾಡಿ ಹಾಡಿ ಪ್ರೇಮಾಲಾಪವ
ದಣಿದು ಮಾತುಮೀರಿ ಮೂಕವಾಗಿ ನಿನಗೆ ಶರಣಾಗಿದೆ ವೀಣೆ
ಎನ್ನ ಹೃದಯಗಾನದೆದುರು ಅದು ಸಪ್ಪೆ ಕಣೇ,
ನಿನ್ನೆಯಳಿದು ಹೂಳಿಹೋಗಿದೆ
ನಾಳೆಯುದಿಸಿ ಬರುವುದೋ ಬಾರದೋ!
ನನ್ನ ನಿನ್ನ ಕೈಯೊಳಗಿದೆ ಇಂದಿನೀ ಚಣ
ಸುರಲೋಕವ ಮೀರಿಸುವ ಸುರೆಯಿದೆ
ಮೇದಿನಿಯ ಮೋದವನೊತ್ತೆಗೊಂಡ ಮಧುವಿದೆ ಇಲ್ಲೆ ಈಗನೀಂಟು ಬಾ
ಇದೆ ಇದೇ ಅಮರಸೊದೆ ಅಮರಲೋಕವೆಲ್ಲಿಹುದೋ?
ಅದರಾಸೆನೇಣಿಗೇಕೆ ಕೊರಳ ಕೊಡುವೆ
ನರಕವೂ ಅಷ್ಟೆ ಈಗನು ಕಳಕೊಂಡರೆ ನರಕವಷ್ಟೆ
ತೆರೆ ಬಾಯಿ ಮಧುವನೀಂಟುವೆ
ತೆರೆ ಕಣ್ಣು ಎದೆಗಿಳಿಯುವೆ ಜೇನಾಗಿ
ತೆರೆಯೆದೆಯ ಒಂದಾಗಿ ಕೂಡುವೆ ನಾನೀ ಭೇದ ನೀಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕ ನೀಲಾಂಬಿಕೆ
Next post ನಗೆ ಡಂಗುರ – ೫೭

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys